ಇಸ್ಕಾನ್ ಹೊಸ ವೈದಿಕ ಸಾಂಸ್ಕೃತಿಕ ಕೇಂದ್ರ (), ಶ್ರೀ ಶ್ರೀ ರಾಧಾ ವೃಂದಾವನಚಂದ್ರ ದೇವಸ್ಥಾನ ಅಥವಾ ಇಸ್ಕಾನ್ ಪುಣೆ ಭಾರತದ ಪುಣೆಯಲ್ಲಿರುವ ಗೌಡಿಯ ವೈಷ್ಣವ ದೇವಾಲಯವಾಗಿದೆ. ಈ ದೇವಾಲಯವು ಹಿಂದೂ ದೇವರಾದ ರಾಧಾ ಕೃಷ್ಣನಿಗೆ ಸಮರ್ಪಿತವಾಗಿದೆ ಮತ್ತು ಇದನ್ನು ೨೦೧೩ ರಲ್ಲಿ ತೆರೆಯಲಾಯಿತು. ಇದು ಪುಣೆ ನಗರದ ಅತಿ ದೊಡ್ಡ ದೇವಾಲಯವಾಗಿದೆ. == ಇತಿಹಾಸ == ದೇವಾಲಯದ ಸಂಕೀರ್ಣವನ್ನು ೬ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಮತ್ತು ಇದು ನಿರ್ಮಾಣಕ್ಕೆ ಏಳು ವರ್ಷಗಳನ್ನು ತೆಗೆದುಕೊಂಡಿತು. ಕ್ಯಾಂಪ್ ನ ಇಸ್ಕಾನ್ ದೇವಸ್ಥಾನ ಮತ್ತು ಭಕ್ತರ ಧನಸಹಾಯದಿಂದ ದೇವಾಲಯವನ್ನು ನಿರ್ಮಿಸಲು ೪೦ ಕೋಟಿ ರೂಪಾಯಿಗಳು ಬೇಕಾಯಿತು. ಈ ದೇವಾಲಯವನ್ನು ೨೦೧೩ ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದರು. ದೇವಾಲಯದ ಸಂಕೀರ್ಣವು ಎರಡು ದೇವಾಲಯಗಳನ್ನು ಹೊಂದಿದೆ- ಮುಖ್ಯ ರಾಧಾ ಕೃಷ್ಣ ದೇವಾಲಯ ಮತ್ತು ವೆಂಕಟೇಶ್ವರ (ಬಾಲಾಜಿ) ದೇವಾಲಯ. ರಾಧಾಕೃಷ್ಣ ದೇವಾಲಯವನ್ನು ಉತ್ತರ ಭಾರತೀಯ ವಾಸ್ತುಶೈಲಿಯಲ್ಲಿ ಕೆಂಪು ಕಲ್ಲು ಮತ್ತು ಅಮೃತಶಿಲೆಯನ್ನು ಬಳಸಿ ನಿರ್ಮಿಸಲಾಗಿದೆ ಮತ್ತು ವೆಂಕಟೇಶ್ವರ ದೇವಾಲಯವನ್ನು ದಕ್ಷಿಣ ಭಾರತದ ವಾಸ್ತುಶಿಲ್ಪ ಶೈಲಿಯಲ್ಲಿ (ತಿರುಮಲದಲ್ಲಿನ ಬಾಲಾಜಿ ದೇವಾಲಯದಂತೆಯೇ) ಕೋಟಾ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ದೇವಾಲಯವು ಭಗವದ್ಗೀತೆ ಮತ್ತು ಶ್ರೀಮದ್ ಭಾಗವತದ ಕುರಿತು ದೈನಂದಿನ ತರಗತಿಗಳನ್ನು ನೀಡುತ್ತದೆ. == ಛಾಯಾಂಕಣ == == ಸಹ ನೋಡಿ == ಇಸ್ಕಾನ್ ಟೆಂಪಲ್ ಬೆಂಗಳೂರು == ಉಲ್ಲೇಖಗಳು ==